Thursday 8 November, 2007

ಕೊಡಚಾದ್ರಿ -6


ಚಿತ್ರ: ನಾವು ಚಾರಣ ಆರಂಭಿಸಿ, ಮುಕ್ತಾಯಗೊಳಿಸಿದ ಮಹಾದ್ವಾರ.


ಕೊಡಚಾದ್ರಿಗೆ ದಾರಿ ತೋರಿಸುತೇನೆ, ಬನ್ನಿ ಎಂದು ನಮಗೆ ಕೊಟ್ಟ ಆಹ್ವಾನ ಸ್ವೀಕರಿಸದೆ ನಾವು ಕೊಲ್ಲೂರಿನ ಕಡೆಗೆ ಹೊರಟೆವು. ಅಯ್ಯೋ ದಾರಿ ಇನ್ನೂ ಮುಗಿಲಿಲ್ಲ... ಇನ್ನೂ ಮುಗಿಲಿಲ್ಲ... ಎಂದುಕೊಂಡು ಒಂದೂವರೆ ಗಂಟೆ ನೆಡೆದು ಹಿಂದಿನ ದಿನ ಬಸ್ಸಿನಿಂದ ಇಳಿದಿದ್ದ -ಕೊಲ್ಲೂರಿಗೆ ಹೋಗುವ- ಟಾರ್ ರಸ್ತೆ ಸೇರಿದೆವು. ಎರಡು ದಿನಗಳು ಸತತವಾಗಿ ನೆಡೆದು ಸುಸ್ತಾಗಿದ್ದ ನಮಗೆಲ್ಲ ಸಧ್ಯ ಎರಡನೇ ದಿನ ಹೆಚ್ಚಿಗೆ ತೊಂದರೆಗೆ ಒಳಗಾಗದೆ ಕೊನೆ ಮುಟ್ಟಿದ್ದಕ್ಕೆ ಸಂತೋಷವಾಗಿತ್ತು. ಆದರೆ ಅಂದು ಕೊಂಡಹಾಗೆ ಕೊಡಚಾದ್ರಿ ಗುಡ್ಡವನ್ನು ನೋಡದೆ ಇದ್ದುದ್ದಕ್ಕೆ ಬೇಸರವೂ ಇತ್ತು.

ಇಲ್ಲಿಂದ ಕೊಲ್ಲೂರಿಗೆ ೧ ರಿಂದ ೨ ಕಿ.ಮೀ. ಕೆಲವರು ನೆಡೆದು ಹೊಗೋಣ ಎಂದರು, ಇನ್ನು ಕೆಲವರು ಬಸ್ಸಿಗೆ ಕಾಯೋಣ ಅಂದು ಅಲ್ಲೇ ರಸ್ತೆ ಪಕ್ಕ ಕೂತರು. ನೆಡೆಯೋದು, ಬಸ್ಸಿಡಿಯೋದು ಎಲ್ಲಾ ಬಿಟು ಆಟೋ ಹಿಡಿದು ಕೊಲ್ಲೂರಿನ ಕಡೆ ಹೊರಟೆವು. ನಮಗಿಂತ ಮುಂಚೆ ಹೋಗಿದ್ದವರು ಕೊಲೂರಿನಲ್ಲಿ ಹರಿಯುವ ಸೌಪರ್ಣಿಕ ನದಿಯ ಬಳಿ ಇರುವುದಾಗಿ ಹೇಳಿದ್ದರು. ಅಲ್ಲಿ ಹೋಗಿ ಅವರನ್ನು ಸೇರಿಕೊಂಡೆವು. ನಮಗೆ ಭೇಟಿಯಾಗಿದ್ದವನು ಹೇಳಿದ್ದನ್ನು ಅವರಿಗೆ ಹೇಳಿದೆವು. ಎಲ್ಲರೂ ನದಿಯಲ್ಲಿ ಮುಳುಗಾಕಿ ಸ್ನಾನ ಮಾಡಿದೆವು. ದೇವಿಯ ದರ್ಶನ ಮಾಡಿ ದೇವಸ್ತಾನದ ಹತ್ತಿರದಲ್ಲೇ ಇದ್ದ ಹೋಟೆಲ್ ಒಂದಕ್ಕೆ ಊಟಕ್ಕೆ ನುಗ್ಗಿದೆವು. ಅಲ್ಲಿ ಇದ್ದುದ್ದನ್ನೆಲ್ಲಾ ತಿಂದು ಬಸ್ಸು ಹಿಡಿಯಲು ಹೊರಟೆವು.

ಕೊಲ್ಲೂರಿನಿಂದ ಬಸ್ಸು ೮ ಗಂಟೆಗೆ ಹೊರಟಾಗ ಸಂತೋಷ, ದುಖಃ ಎರಡು ನಮ್ಮನ್ನು ಆವರಿಸಿಕೊಂಡಿದ್ದವು. ತೊಂದರೆ ಇಲ್ಲದೆ ವಾಪಸ್ಸು ಬಂದಿದ್ದು ಸಂತೋಷಕ್ಕೆ ಕಾರಣವಾದರೆ, ಕೊಡಚಾದ್ರಿಯ ತುದಿ ತಲುಪದೆ ಹಿಂದಿರುಗಿದ್ದಕ್ಕೆ ಬೇಸರವೂ ಇತ್ತು. ಆದರೂ ನಮಗಾದ ಅನುಭವ ಅಗಾಧವಾಗಿದ್ದದಾಗಿತ್ತು.

ಇಲ್ಲಿಗೆ ನಮ್ಮ ಕೊಡಚಾದ್ರಿಯ ಅನುಭವವನ್ನು ಮುಗಿಸೋಣ. ಇದನ್ನೆಲ್ಲಾ ಓದಿ ನಿಮಗೂ ಎಲ್ಲಾದರೂ ಚಾರಣಕ್ಕೆ ಹೋಗಬೇಕು, ಇಲ್ಲವೇ ಪ್ರಕೃತಿಯ ತೆಕ್ಕೆಗೆ ಬೀಳಬೇಕು ಎನ್ನಿಸಿರಬೇಕು. ಚಾರಣಕ್ಕೆ ಹೊರಟಿರುವವರಿಗೆಲ್ಲಾ ನಮ್ಮ ತಂಡದ ಕಡೆಯಿಂದ ಒಂದೆರೆಡು ಮಾತುಗಳು.

ಅಗತ್ಯವಾಗಿ ಮಾಡಬೇಕಾಗಿದ್ದು:

1. ಸಾಕಾಗುವಷ್ಟು ಊಟ ಮತ್ತು ನೀರು.
2. ಬೇಕಿದ್ದಷ್ಟು Electoral, Glucose Powder, First Aid Kit ಮತ್ತು ಅಗತ್ಯವಿದ್ದ ಔಷಧಗಳು.
3. ಕಾಡು ಮತ್ತು ಗುಡ್ಡಗಳಲ್ಲಿ ತಿರುಗಲು ಮಳೆಗಾಲ ಸೂಕ್ತವಲ್ಲ.
4. ಬೆಂಕಿ ಪೊಟ್ಟಣ ನೀರಿಗೆ ಬಿದ್ದರೆ ಉಪಯೋಗಕ್ಕೆ ಬರುವುದಿಲ್ಲ ಆದರಿಂದ lighter ಇರಲಿ. ಚಾಕು, ಮೇಣದ ಬತ್ತಿಗಳು ಮತ್ತು ಬ್ಯಾಟರಿ ಅಗತ್ಯ.
5. ಹೊರಟಿರುವ ಸ್ತಳದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ. ಸಾಧ್ಯವಾದಲ್ಲಿ ಸ್ತಳೀಯರನ್ನ ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮೊಳಗೇ ಮುಂಚೆ ಆ ಜಾಗಕ್ಕೆ ಹೋಗಿ ಬಂದವರಿದ್ದರೆ ಒಳ್ಳೆಯದು.
6. ಜಿಗಣೆಗಳ ಕಾಟಕ್ಕೆ ತಕ್ಕ ಮುಂಜಾಗ್ರತೆ ಮತ್ತು ಔಷಧಿ ಅಗತ್ಯ.
7. ಅಗತ್ಯ ಇಲ್ಲದ್ದನ್ನೆಲ್ಲಾ ತುಂಬಿಸಿ ಬ್ಯಾಗುಗಳನ್ನು ಹೊರಲಾರದ ಹಾಗೆ ಮಾಡಿಕೊಳ್ಳ ಬೇಡಿ. ಏನಾದ್ರು ಹೆಚ್ಚಿಗೆ ತೆಗೆದುಕೊಂಡು ಹೋಗಬೇಂದಿದ್ದಲ್ಲಿ, ಊಟ ಮತ್ತು ನೀರಿಗೆ ಆದ್ಯತೆ ಕೊಡಿ.

ಅಗತ್ಯವಾಗಿ ತಪ್ಪಿಸಬೇಕಾದುದ್ದು -ಮಾಡಬಾರದ್ದು:

1. ಸಿಗರೇಟು ಮತ್ತು ಮಧ್ಯಪಾನ ಬೇಡ.
2. ಕಾಡಿನಲ್ಲಿ ಬೆಂಕಿಯ ಬಗ್ಗೆ ಎಚ್ಚರ ಇರಲಿ. ಎಲ್ಲೆಂದರಲ್ಲಿ ಬೆಂಕಿ ಹಾಕಬೇಡಿ.
3. ದಾರಿಗಳನ್ನು ಬಿಟ್ಟು ಬೇರೆಡೆ ಹೋಗಬೇಡಿ. ಸಾಧ್ಯವಾದಷ್ಟು ಇರುವ ದಾರಿಗಳನ್ನೇ ಬಳಸಿ.
4. ರಾತ್ರಿಗಳಲ್ಲಿ ಕಾಡಿನಲ್ಲಿ ಉಳಿಯುವಂತಹ ಪ್ರಸಂಗ ತಂದುಕೊಳ್ಳಬೇಡಿ. ಉಳಿದರೂ ನೀರು ಇರುವ ಕಡೆ ಉಳಿಯ ಬೇಡಿ.
5. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ನೀವು ಮಾಡಿದ ಕಸವನ್ನು ನಿಮ್ಮ ಜೊತೆಯಲ್ಲಿಯೇ ವಾಪಸ್ಸು ತನ್ನಿ.
6. ಕಾಡುಗಳು ಮತ್ತು ನಿರ್ಜನವಾದ ಜಾಗಗಳಲ್ಲಿ ಕೂಗಾಡುವುದು, ಅಬ್ಬರದ ಸಂಗೀತ ಹಾಕುವುದು ಬೇಡ.
7. Heroism ಇಂದ ದೂರ ಇರಿ. ಗೊತ್ತಿಲ್ಲದ/ ಪರಿಚಯವಿಲ್ಲದ ನೀರಿನ ಜಾಗದಲ್ಲಿ ಈಜಲು ಹೋಗಬೇಡಿ.

5 comments:

Manju (Janakiram) said...

ಕೊನೆಗೂ ಮುಗಿಸಿದೆಯ? ತುಂಬಾ ದನ್ಯವಾದಗಳು. ಬೇಗ ಸಕಲೇಶಪುರ, ಜೋಗ ಮತ್ತು ಮುಲ್ಲಯಿಂಗಿರಿ ಬಗ್ಗೆ ಬರಿ :)

Harisha - ಹರೀಶ said...

ಆದರೆ ನಿಮಗೆ ಕೊಡಚಾದ್ರಿಗೆ ಹೋಗಲಾಗದಿದ್ದಕ್ಕೆ ನನ್ನ ಅನುಕಂಪವಿದೆ.

ನಿಮ್ಮ ಸಲಹೆಗಳು ಖಂಡಿತ ಉಪಯುಕ್ತವಾಗಿವೆ. ಅವೆಲ್ಲವನ್ನೂ ಗಮನದಲ್ಲಿರಿಸಿಕೊಂಡಿರುತ್ತೇನೆ.

ಅನಂತ said...

ನಿಮ್ಮ ಕೊಡಚಾದ್ರಿ ಸರಣಿಯನ್ನ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.. ತುಂಬಾ ಚೆನ್ನಾಗಿ ಬರ್ದಿದಿರಾ.. ಕೊಡಚಾದ್ರಿ ಮುಟ್ಟದಿದ್ರೇನಂತೆ, ನಿಮಗಾಗಿರೋ ವಿಶಿಷ್ಟ ಅನುಭವಗಳನ್ನ ಮರೆಯೊಕ್ಕೇ ಸಾಧ್ಯ ಇಲ್ಲ ಅನ್ಸುತ್ತೆ.. ;)

Anonymous said...

very nice experience

Srikanth Manjunath said...

ಕೊಡಚಾದ್ರಿಯ ಅನುಭವ ನಿಜವಾಗಿಯೂ ಕಾಡು ಹರಟೆಯೇ ಸರಿ. ನಿಮ್ಮ ಬರವಣಿಗೆ ನಿಜವಾಗಿಯೂ ಅದ್ಭುತ. ಒಂಥರಾ ಚಾರಣ ಮಾಡಿದ ಅನುಭವವೇ ಆಯಿತು. ನಿಮ್ಮ ಬರವಣಿಗೆಯ ಶೈಲಿಗೆ ನನ್ನ ನಮನಗಳು