Monday 9 July, 2007

ಬರೀಯೊಣು ಬಾರ

ಹೈಸ್ಕೂಲಿನಲ್ಲಿದ್ದಾಗ ಕತೆ, ಕವನ ಬರೀತಿದ್ದೆ ಚಿಕ್ಕಮಗಳೂರಿನ ಜನಮಿತ್ರದಲ್ಲಿ ಒಂದೋ, ಎರಡೊ ಕವನಗಳು ಪ್ರಕಟವಾಗಿದ್ದವು. ಆಗ ಓದು ಕಡಿಮೆ ಇತ್ತು, ಬರಹ ಜಾಸ್ತಿ. ದಿನ ಕಳೆದಂತೆ ಕುವೆಂಪು, ತೇಜಸ್ವಿ, ಭೈರಪ್ಪ, ಲಂಕೆಶ್ ಹೀಗೆ ಇನ್ನೂ ಅನೇಕರ ಗದ್ಯ ಸಾಹಿತ್ಯ ಓದುತ್ತ ಬಂದೆ. ಬರೆದರೆ ಹೀಗೆ ಬರೀ ಬೇಕು ಇಲ್ಲಾಂದ್ರೆ ಸುಮ್ಮನೆ ಓದಬೇಕು ಅಂತ ತೀರ್ಮಾನ ಮಾಡಿ, ನಾನು ಬರೀತಿದ್ದ ಡೈರಿ ತೆಗೆದಿಟ್ಟೆ.

ನನ್ನ ಚಿಕ್ಕಂದಿನಲ್ಲಿ ಇದ್ದ ಬರಹಗಾರನಾಗಬೇಕು ಅನ್ನೊ ತವಕ ಮಾಸಿ ಹೊಗಿದೆ. ಕನ್ನಡದಲ್ಲಿ ವ್ಯವಹಾರ ಕಡಿಮೆಯಾಗುತ್ತಿದೆ. ಆದರೂ ನನ್ನ ಕನ್ನಡ ಓದು ನಿಂತಿಲ್ಲ. ಇಂಗ್ಲೀಷ್ ಬಳಕೆ ಏಷ್ಟೇ ಹೆಚ್ಚಾದರು ಅದು ನಮ್ಮ ಮನೆ ಭಾಷೆ ಆಗುವ ಸಾಧ್ಯತೆಯಿಲ್ಲ ಆದ್ದರಿಂದ ನನಗೆ ಮತ್ತು ಕರ್ನಾಟಕದ ಎಲ್ಲರಿಗೂ ಕನ್ನಡ ಅತ್ಯವಶ್ಯಕವಾಗಿ ಬೇಕು. ನಾನು ನಿಂತ ನೀರಾಗಬಾರದು, ಬರೆಯುವುದರ ಮೂಲಕ ಚೈತನ್ಯ ಹೆಚ್ಚಿಸಿಕೊಳ ಬೇಕು ಅಂತ ಅನ್ನಿಸ್ತಿದೆ.
ಅದರ ಫಲ "ಕಾಡು ಹರಠೆ" ನೋಡೊಣ ಇದು ಎಷ್ತು ದಿನ ನಡಿಯುತ್ತೆ ಅಂತ...

ಮೇಲೆ ಹೇಳಿದ ಹಾಗೆ ಕನ್ನಡದಲ್ಲಿ ವ್ಯವಹಾರ ಕಡಿಮೆ ಆಗುತ್ತಿದೆ, ನಾನು ಸತತವಾಗಿ ಕನ್ನಡ ಬರೆದದ್ದು PUC ಪರೀಕ್ಷೆಲಿ ಅಂದುಕೊಳ್ಳುತ್ತೇನೆ... ಅದಾದ ನಂತರ ಸತತವಾಗಿ ಕನ್ನಡದಲ್ಲಿ ಬರೆದ ನೆನಪು ಬರುತ್ತಿಲ್ಲ. ಬರೆದು ತುಂಬ ದಿನವಾಗಿದೆ, blog ಮಾಡೊದು ನನಗೆ ಹೊಸತು, 'ಬರಹ' ತಂತ್ರಾಂಶ ಬಳಸಿಕೊಂಡು ಬರೀತಿದಿನಿ ಅದಕ್ಕೂ ಹೊಸದಾಗಿ ತೆರದುಕೊಳ್ಳುತ್ತಿದ್ದೀನಿ... ಇದೆಲ್ಲವನ್ನು ಲೆಕ್ಕಿಸಿ ಅಲ್ಲೊಂದು ಇಲ್ಲೊಂದು ವ್ಯಾಕರಣ ಇಲ್ಲವೇ ಭಾಷಾ ಪ್ರಯೋಗದಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ, ತಪ್ಪುಗಳು ತುಂಬಾನೇ ಜಾಸ್ತಿ ಆಯಿತು ಅನ್ನಿಸಿದರೆ ನನಗೆ ಬರೆದು ತಿಳಿಸಿ.

ಗೆಳೆಯ ಜಾನಕಿರಾಮ ಕೇಳಿದ, 'ಏನೊ, ಕಾಡು ಹರಠೆ ಅಂದ್ರೆ? ಕಾಡಲ್ಲಿ ನೋಡಿ ಬಂದಿದ್ದರ ಬಗ್ಗೆ ಬರೀತಿಯ?' ನನಗೆ ತತ್ ಕ್ಶಣಕ್ಕೆ ಎನೂ ಹೊಳಿಲಿಲ್ಲ, 'ಕೆಲಸಕ್ಕೆ ಬಾರದ ಮಾತುಗಳು ಅಂತ ಹೇಳಬಹುದು' ಅಂದೆ.' 'ಓ ಕಾಮ್ ಚೊರ್ ಗಳಿಗೆ ಅಂತ ಹೇಳು' ಅಂದ. ಓಳ್ಳೆ ಆರಂಭ ಅಂತ ಹೇಳಿ ನನ್ನ ಪರಿಚಯ ಪೋಸ್ಟ್ ಮಾಡಿದೆ...

No comments: