Friday 27 July, 2007

ಬಾಗಿಲಿಂದಾಚೆ...

ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾಗ ದೊರೆತದ್ದು ಇದು. ಶ್ರೀ.ವಸುದೇಂಧ್ರರವರ 'ಬಾಗಿಲಿಂದಾಚೆ ಪೊಗದಿರೆಲೋ ರಂಗ' ಎಂಬ ಈ ಕತೆಯನ್ನೋಮ್ಮೆ ಓದಿ. ಇದನ್ನು ಓದಿದ ಮೇಲೆ ನನಗೆ ಅನ್ನಿಸಿದ್ದು ಇದು...

ನಾನು ೫ನೇ ಕ್ಲಾಸಿನಲ್ಲಿ ನಮ್ಮ ದೊಡ್ಡಮ್ಮನ ಮನೆಯಿಂದ ಒಬ್ಬನೆ ವಾಪಸ್ ಬಂದಿದ್ದೆ. ನಾನು ಮನೆ ತಲುಪಿದಾಗ ನಮ್ಮ ಕೆಳಗಿನ ಮನೆ ಆಂಟಿ ನಮ್ಮಮ್ಮನ ಹತ್ರ ಮಾತಾಡುತಿದ್ರು. ಅವರಿಗೆ ನಾನು ಒಬ್ಬನೆ ಬಸ್ಸಿನಲ್ಲಿ ಬಂದೆ ಅಂತ ನಂಬೊಕೆ ಸಾದ್ಯಾನೇ ಆಗ್ತಿರಲಿಲ್ಲ. ಕಾರಣ - ಅದರ ಹಿಂದಿನ ವಾರ ೧೨ನೇ ತರಗತಿಯಲ್ಲಿ ಓದುತಿದ್ದ ಅವರ ಮಗನ್ನು ಅವನ ಚಿಕ್ಕಮ್ಮ ಬಸ್ಸಿನಲ್ಲಿ ಕಳಿಸಿ ನಂತರ ಅವನ ಕ್ಷೇಮಕ್ಕೆ ಹೆದರಿ ಹಿಂದಿನ ಬಸ್ಸಿನಲ್ಲೇ ಬಂದಿದ್ದರು.
ನಾನು ರಜಾ ದಿನಗಳಲ್ಲಿ ಕಥೆ ಪುಸ್ತಕಗಳನ್ನ ಓದುವುದನ್ನ ನೊಡಿ ಅವರ ಮಕ್ಕಳಿಗೆ ನೀವು ಯಾಕೆ ಓದಲ್ಲ ಎಂದು ತಾಕೀತು ಮಾಡುತಿದ್ದ ತಾಯಿಯರ ಮಧ್ಯೆ ನನ್ನ ಬಾಲ್ಯವನ್ನ ಅದರಂತೆಯ ಬಿಟ್ಟ ನನ್ನ ತಂದೆ ತಾಯಿಯನ್ನು ಅಣ್ಣಂದಿರನ್ನು ನೆನೆಸಿಕೊಂಡೆ. ವಸುಧೇಂದ್ರರ ಕತೆ ಓದಿ ಸಂತೋಷ ಆಯಿತು.

ಕತೆ ಓದುವುದಕ್ಕೆ ಇಲ್ಲಿ ಕ್ಲಿಕ್ಕಿಸಿ.

No comments: